Quantcast
Channel: Samvada
Viewing all articles
Browse latest Browse all 3435

ಅರ್ನಬ್ ಗೋಸ್ವಾಮಿ ವಿರುದ್ಧ ನಡೆದ ದಬ್ಬಾಳಿಕೆ, ಬಂಧನ : ವಿ ಎಚ್ ಪಿ ಖಂಡನೆ

$
0
0

ಶ್ರೀ ಕೇಶವ ಹೆಗಡೆ,
ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷದ್ ಅವರ ಪತ್ರಿಕಾ ಪ್ರಕಟಣೆ

ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ನಡೆದ ದಬ್ಬಾಳಿಕೆ ಹಾಗೂ ಅವರನ್ನು ಇಂದು ಬಂಧಿಸುವ ಪ್ರಯತ್ನ ಪತ್ರಕರ್ತರಿಗೆ ಭಯ ಹುಟ್ಟಿಸುವಂತಹದ್ದಾಗಿದೆ. ೧೯೭೫ರ ತುರ್ತು ಪರಿಸ್ಥಿತಿಯ ನೆನಪನ್ನು ಮಾಡಿಸುವ ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ. ಅರ್ನಾಬ್ ಗೋಸ್ವಾಮಿ ವಿವಿಧ ವಿಷಯಗಳಲ್ಲಿ ರಾಜಕೀಯ ಹಾಗೂ ಇನ್ನಿತರ ಪ್ರಭಾವಿ ವ್ಯಕ್ತಿಗಳ ಭ್ರಷ್ಟತೆಯನ್ನು ಬಯಲಿಗೆಳೆದಿರುವುದು ಎಲ್ಲರ ಕೆಂಗಣ್ಣಿಗೆ ಪಾತ್ರವಾಗಿದೆ. ರಾಜಕೀಯ ಹಾಗೂ ಸ್ವಾರ್ಥ ಹಿತಾಸಕ್ತಿಯ ಕೈಗೊಂಬೆಯಾಗಿರುವ ಮುಂಬೈ ಪೊಲೀಸ್ ಆಯುಕ್ತರಾದ ಪರಂ ಬೀರ್ ಸಿಂಗ್ ಸಂವಿಧಾನದ ಚೌಕಟ್ಟು ಮೀರಿ ದ್ವೇಷಪೂರಿತರಾಗಿ ಅರ್ನಬ್ ಗೋಸ್ವಾಮಿಯವರ ವಿರುದ್ಧ ಹಗೆ ಸಾಧಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಏಕಪಕ್ಷವಾಗಿ ವರ್ತಿಸುತ್ತಿರುವ ಮಹಾರಾಷ್ಟ್ರ ಸರ್ಕಾರ, ಮುಂಬೈ ಪೊಲೀಸ್ ಆಯುಕ್ತರಾದ ಪರಂ ಬೀರ್ ಸಿಂಗ್ ಹಾಗೂ ಅಲ್ಲಿನ ಆರಕ್ಷಕರು ಸಭ್ಯತೆಯಿಂದ ವರ್ತಿಸಬೇಕು ಹಾಗೂ ಈ ವಿಷಯವಾಗಿ ಸಂಪೂರ್ಣ ನಿಷ್ಪಕ್ಷವಾದ ತನಿಖೆಯಾಗಬೇಕು ಎಂದು ವಿ ಎಚ್ ಪಿ ಆಗ್ರಹಿಸುತ್ತದೆ.

ಶ್ರೀ ಕೇಶವ ಹೆಗಡೆ,
ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷದ್ ಅವರ ಪತ್ರಿಕಾ ಪ್ರಕಟಣೆ

ಶ್ರೀ ಕೇಶವ ಹೆಗಡೆ



The post ಅರ್ನಬ್ ಗೋಸ್ವಾಮಿ ವಿರುದ್ಧ ನಡೆದ ದಬ್ಬಾಳಿಕೆ, ಬಂಧನ : ವಿ ಎಚ್ ಪಿ ಖಂಡನೆ first appeared on Vishwa Samvada Kendra.


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>