Quantcast
Channel: Samvada
Viewing all articles
Browse latest Browse all 3435

ನೇಪಾಳದಲ್ಲಿ ಭೀಕರ ಭೂಕಂಪ: ಸಮಾಜ ಬಾಂಧವರಲ್ಲಿ ಆರೆಸ್ಸೆಸ್ ಮನವಿ.

$
0
0

ರಾಷ್ಟ್ರೀಯ ಸ್ವಯಂಸೇವಕ ಸಂಘ – ಕರ್ನಾಟಕ

# 74, ಕೇಶವಕೃಪ, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು -560 004

080-26610081 www.samvada.org, karnatakarss@gmail.com

RSS-Nepal-Relief-Poster-Apr - Copy

 

ಸಮಾಜ ಬಾಂಧವರಲ್ಲಿ ಒಂದು ಮನವಿ.

ಎಪ್ರಿಲ್ 25, 2015 ರಂದು ಉಂಟಾದ ಭೀಕರ ಭೂಕಂಪಕ್ಕೆ ನೆರೆಯ ದೇಶ ನೇಪಾಳ ನಲುಗಿ ಹೋಗಿದೆ. ಸಾಂಸ್ಕೃತಿಕ ಶ್ರೀಮಂತಿಕೆಯ ನಾಡಾದ ನೇಪಾಳದ ಪ್ರಾಚೀನ ಸ್ಮಾರಕಗಳು, ದೇಗುಲಗಳು ಸೇರಿದಂತೆ ರಸ್ತೆ-ಶಾಲೆ-ಆಸ್ಪತ್ರೆ-ಅಂಗಡಿಗಳು ಧರಾಶಾಯಿಯಾಗಿವೆ. 3500 ಕ್ಕೂ ಹೆಚ್ಚು ಮಂದಿ ಮೃತ ಪಟ್ಟಿದ್ದಾರೆ. ಸಹಸ್ರಾರು ಜನರು ಈ ಭೀಕರ ಭೂಕಂಪದಿಂದ ಸಂತ್ರಸ್ತರಾಗಿದ್ದಾರೆ. ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದೆ. ಭಾರತದ ಸರಕಾರ ಮತ್ತು ದೇಶದ ಜನತೆ ತಕ್ಷಣ ಸ್ಪಂದಿಸಿದೆ. ಆರೆಸ್ಸೆಸ್ ಸ್ವಯಂಸೇವಕರೂ ಈಗಾಗಲೇ ಪರಿಹಾರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಸೇವಾಭಾರತಿ ಅಲ್ಲಲ್ಲಿ ಸಹಾಯಕೇಂದ್ರಗಳನ್ನು ಆರಂಭಿಸಿದೆ. ಸಾವಿರಾರು ನೊಂದ ಜೀವಗಳಿಗೆ ಆಸರೆಯಾಗಿದ್ದಾರೆ. ನೇಪಾಳದ ನಾಗರಿಕರ ಬದುಕು  ದುಸ್ತರವಾಗಿದೆ. ಅಲ್ಲಿನ ಸಂತ್ರಸ್ತರಿಗೆ ಇದೀಗ ಮಾನವೀಯ ನೆರವು ಅವಶ್ಯವಿದ್ದು ಸಮಾಜ ಬಾಂಧವರೆಲ್ಲರೂ ಅಲ್ಲಿನ ಜನರ ಬದುಕನ್ನು ಮತ್ತೆ ಕಟ್ಟಿಕೊಡುವಲ್ಲಿ ಸಹಕರಿಸಬೇಕಿದೆ. ಆರ್ಥಿಕ ಧನಸಹಾಯವನ್ನು ದೇಣಿಗೆ ರೂಪದಲ್ಲಿ ನೀಡಿ ಸಹಕರಿಸಬೇಕು ಹಾಗೂ ನೇಪಾಳದ   ಜನತೆಗೆದುರಾಗಿರುವ ಈ ಹಠಾತ್ ಸಂಕಷ್ಟವನ್ನು ನಿವಾರಿಸಲು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಕಳಕಳಿಯ ವಿಜ್ಞಾಪನೆಗಳು.

FOR ONLINE TRANSFER:  

“RSS Sanchaalita Santrasta Parihaara Nidhi”

SB Account Number: 0789101009327, IFSC Code: CNRB0000789 Canara Bank, Kempegouda Nagar Branch, (Near Chamarajapet Uma Theater) Bangalore-560018

ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರನಿಧಿ “RSS Sanchaalita Santrasta Parihaara Nidhi”  ಹೆಸರಿನಲ್ಲಿ ಚೆಕ್/ಡಿ.ಡಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕೆಂದು ಕೋರುತ್ತೇವೆ

ಕೇಶವ ಕೃಪಾ ಆರೆಸ್ಸೆಸ್ ಕಛೇರಿ                                                  ಕೇಶವ ಕುಂಜ ಆರೆಸ್ಸೆಸ್ ಕಛೇರಿ

ಆರೆಸ್ಸೆಸ್ ಕಛೇರಿ                                                                     ಆರೆಸ್ಸೆಸ್ ಕಛೇರಿ

#೭೪, ರಂಗರಾವ್ ರಸ್ತೆ                                                           ಲೋಕಮಾನ್ಯ ತಿಲಕ್ ರಸ್ತೆ

ಶಂಕರಪುರಂ, ಬೆಂಗಳೂರು-೫೬೦೦೦೪                                   ಗೋಕುಲ ರಸ್ತೆ, ಹುಬ್ಬಳ್ಳಿ

ದೂರವಾಣಿ:080-26610081                                                        ದೂರವಾಣಿ:೦೮೩೬-೨೨೩೨೯೭೨

ನಿಮ್ಮ ಉದಾರ ನೆರವಿನ ನಿರೀಕ್ಷೆಯಲ್ಲಿ :

ವಿ ನಾಗರಾಜ್, 

ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕರು

ನೀವು ಇಂಟರ್‌ನೆಟ್ ಮೂಲಕ ಅಥವಾ ಅಂಚೆ ಮೂಲಕ ಚೆಕ್/ಡಿಡಿ ಕಳುಹಿಸಿದರೆ ಆ ಕುರಿತು 9448284625, 9448847866  ಅಥವಾ karnatakarss@gmail.com  ಗೆ ಇ-ಮೈಲ್ ಮೂಲಕ ದಯವಿಟ್ಟು ತಿಳಿಸಿ.


Viewing all articles
Browse latest Browse all 3435

Trending Articles



<script src="https://jsc.adskeeper.com/r/s/rssing.com.1596347.js" async> </script>